Sunday, August 3, 2008

ಮರೆಗುಳಿ ಪತ್ರಕರ್ತರು!

ಹಳೆಯದನ್ನು ಜನಮಾತ್ರ ಅಲ್ಲ ಮಾಧ್ಯಮದವರೂ ಮರೆಯೋದರಲ್ಲಿ ಹಿಂದೆ ಬಿದ್ದಿಲ್ಲ. ಇದಕ್ಕೆ ಇಲ್ಲೊಂದು ಉದಾಹರಣೆ ಇದೆ ಕೇಳಿ...
ಬಿಜೆಪಿ ಸಂಪುಟದಲ್ಲೀಗ ಸಚಿವರಾಗಿರುವ ಡಿ.ಸುಧಾಕರ್ ವಿರುದ್ಧ ಕಳೆದ ಚುನಾವಣೆ ವೇಳೆ ಹಣ,ಹೆಂಡ ಹಂಚಿದ ದೂರುಗಳಿತ್ತು.ಇದನ್ನು ಸುದ್ದಿ ಮಾಡಲು ಹೊರಟ ಟಿವಿ, ಪತ್ರಿಕಾ ವರದಿಗಾರರಿಬ್ಬರನ್ನು ಸಚಿವ ಹಾಗೂ ಅವರ ಬೆಂಬಲಿಗರು ಕೂಡಿ ಹಾಕಿ ಜೀವ ಬೆದರಿಕೆ ಹಾಕಿದ್ದರು.ಸಾಲದ್ದಕ್ಕೆ ದಾಖಲೆಗಳಿದ್ದ ಕ್ಯಾಸೆಟನ್ನೂ ಕ್ಯಾಮೆರಾಮೆನ್ ಕೈಯಿಂದ ಬಲವಂತವಾಗಿ ಕಿತ್ತುಕೊಂಡಿದ್ದರು.ಈ ಸಂಬಂಧ ಸುಧಾಕರ್ ವಿರುದ್ಧ ಹಿರಿಯೂರು ಠಾಣೆಯಲ್ಲಿ ದೂರೂ ದಾಖಲಾಗಿತ್ತು.ಆದರೆ, ನಂತರ ಅವರು ಶಾಸಕರಾಗಿ ಆಯ್ಕೆಯಾದರು.ಅದೃಷ್ಟ ನೆಟ್ಟಗಿತ್ತು ನೋಡಿ ಸಚಿವರೂ ಆದರು.
ಮೊನ್ನೆ, ಮೊನ್ನೆ ಚಳ್ಳಕೆರೆಯಲ್ಲಿ ನಡೆದ ಪತ್ರಿಕಾ ದಿನಾಚರಣೆಗೆ ಇದೇ ಸುಧಾಕರ್ ಅವರನ್ನು ಮುಖ್ಯಅತಿಥಿಯಾಗಿ ಕರೆದ ಪತ್ರಕರ್ತರು ಅವರಿಂದ ಪತ್ರಕರ್ತರು ಹೇಗಿರಬೇಕೆಂಬ ಪಾಠ ಕೂಡ ಹೇಳಿಸಿಕೊಂಡರು.
ಸಚಿವರನ್ನು ಕರೆಯುವುದು ತಪ್ಪಲ್ಲ. ಆದರೆ, ಪತ್ರಕರ್ತರಿಗೇ ಧಮಕಿ ಹಾಕಿದವರನ್ನಾ...

No comments: